ಬಿಜೆಪಿ ಆರು ಮಂದಿ ಹಾಲಿ ಶಾಸಕರಿಗೆ ಟಿಕೆಟ್ ಇಲ್ಲ -ಯಡಿಯೂರಪ್ಪ

ಕಲಬುರ್ಗಿ: ಈ‌ ಬಾರಿಯ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಸಿಕ್ಕೇಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಹಾಲಿ ಬಿಜೆಪಿ ಶಾಸಕರಿಗೆ ಶಾಕ್ ಕಾದಿದೆ.

ಅಂತವರಿಗೆ ಈಗ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರಿಯಾದ ಶಾಕನ್ನೇ ಕೊಟ್ಟಿದ್ದಾರೆ.

ಕಲಬುರ್ಗಿಯಲ್ಲಿ ಮಂಗಳವಾರ  ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಿಎಸ್

 ವೈ ಈಗ ಇರುವ ಹಾಲಿ ಶಾಸಕರ ಪೈಕಿ‌ ಆರು ಮಂದಿ ಬಿಟ್ಟು ಉಳಿದ ಎಲ್ಲರಿಗೂ ಟಿಕೆಟ್ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಸೇರುವರಿಗೆ ಸ್ವಾಗತವಿದೆ ಹಾಗೆಯೇ ಬಿಜೆಪಿ ಬಿಟ್ಟು ಹೋಗುವವರಿಗೂ ಅವಕಾಶವಿದೆ ಅಂತವರು ಹೋಗಬಹುದು. ಅಡ್ಡಿ ಇಲ್ಲ ಎಂದು ಯಡಿಯೂರಪ್ಪ ಹೇಳಿದರು.

ಹಾಲಿ ಶಾಸಕರ ಪೈಕಿ ಕೊಕ್ ಪಡೆಯುತ್ತಿರುವ ಆರು ಶಾಸಕರು ಯಾರೆಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ.

ಗುಜರಾತ್ ನಂತೆ ಶೇಕಡಾ 30 ಶಾಸಕರಿಗೆ ಕರ್ನಾಟಕದಲ್ಲೂ ಟಿಕೆಟ್ ನಿರಾಕರಿಸಲಾಗುತ್ತದೆ ಎಂಬ ಲೆಕ್ಕಾಚಾರ ಈಗ ಉಲ್ಟಾ ಆಗಿದೆ.

ಕೆಲವರಿಗೆ ವಯಸ್ಸಿನ ಆಧಾರದ ಮೇಲೆ ಟಿಕೆಟ್ ಕೈತಪ್ಪಿ ತಮಗೆ ಟಿಕೆಟ್ ಸಿಗುತ್ತದೆ ಎಂದು ನಿರೀಕ್ಷೆ ಹೊಂದಿದ್ದವರಿಗೂ ಯಡಿಯೂರಪ್ಪ ಹೇಳಿಕೆ ಶಾಕ್ ಆಗಿದೆ.