ಸೋಮಣ್ಣ ಸೇರಿ ಯಾರೂ ಪಕ್ಷ ತೊರೆಯಲ್ಲ; ಬಿ ಎಸ್ ವೈ ವಿಶ್ವಾಸ

ಯಾದಗಿರಿ:  ಸಚಿವ ವಿ.ಸೋಮಣ್ಣ ಸೇರಿ ಯಾರೂ ಬಿಜೆಪಿ ಬಿಡುವುದಿಲ್ಲ ಎಂದು ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ಯಾರೂ ನಮ್ಮ ಪಕ್ಷ ಬಿಡುತ್ತಿಲ್ಲ,ಎಲ್ಲಾ ಊಹಾಪೋಹ,ಎಲ್ಲರೂ ನಮ್ಮೊಂದಿಗೇ ಇರುತ್ತಾರೆ ಎಂದು ಹೇಳಿದರು.

ಯಾದಗಿರಿಯಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರಿಗೆ ಹೋದ ಬಳಿಕ ಎಲ್ಲರನ್ನೂ ಭೇಟಿ ಮಾಡುತ್ತೇನೆ. ಎಲ್ಲರೂ ನಮ್ಮ ಜೊತೆಯಲ್ಲೇ ಇರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಧ್ಯಕ್ಕೆ ವಿರೂಪಾಕ್ಷಪ್ಪಗೆ ರಿಲೀಫ್ ಸಿಕ್ಕಿದೆ. ಮಾಡಾಳ್ ವಿರುದ್ದ ಪಕ್ಷದಿಂದ ಕ್ರಮ ಕೈಗೊಳ್ಳುವ ಕುರಿತು ನನಗೆ ಗೊತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಯಡಿಯೂರಪ್ಪ ಉತ್ತರಿಸಿದರು.