ಧಾರವಾಡ: ಉರಿಗೌಡ, ನಂಜೇಗೌಡ ಐತಿಹಾಸಿಕ ವ್ಯಕ್ತಿಗಳು. ಟಿಪ್ಪುವನ್ನ ಅವರಿಬ್ಬರೂ ಕೊಂದಿದ್ದು ಐತಿಹಾಸಿಕ ಸತ್ಯ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಧಾರವಾಡದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಟಿಪ್ಪು ಹಾಸನವನ್ನ ಕೈಮಾಬಾದ್ ಎಂದು ಕರೆದಿದ್ದ. ಹೆಚ್.ಡಿ ಕುಮಾರಸ್ವಾಮಿಗೂ ಹಾಸನವನ್ನ ಕೈಮಾಬಾದ್ ಎಂದು ಕರೆಯಲು ಇಷ್ಟವೇನೊ ಎಂದು ವ್ಯಂಗ್ಯವಾಡಿದರು.
ಟಿಪ್ಪು ಸಿದ್ದಾಂತ ಬದುಕಿದ್ರೆ ಹಾಸನ ಕೈಮಾಬಾತ್ ಆಗುತ್ತೆ. ಟಿಪ್ಪು ಬದುಕಿದ್ದರೇ ಯಾರ್ಯಾರ ಕತೆ ಏನಾಗುತ್ತಿತ್ತೋ ಏನೋ ಎಂದು ಸಿ.ಟಿ ರವಿ ಮಾರ್ಮಿಕವಾಗಿ ನುಡಿದರು.