ಯಾವುದೇ ತನಿಖೆಗೂ ಸಿದ್ದ -ಸಿಎಂ ಸಿದ್ದು

ಬೆಂಗಳೂರು: ಮುಡಾ‌ ಹಗರಣ ಸಂಬಂಧ ಯಾವುದೇ‌ ತನಿಖೆ ಎದುರಿಸಲು ಸಿದ್ದ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಜನಪ್ರತಿನಿಧಿಗಳ ನ್ಯಾಯಾಲಯ ಮೈಸೂರು ಲೋಕಾಯುಕ್ತ ಪೊಲೀಸರಿಗೆ ತನಿಖೆ ನಡೆಸುವಂತೆ ಸೂಚಿಸಿದೆ.ನಾನು ಕೋರ್ಟ್ ಪ್ರತಿಯನ್ನು ಇನ್ನೂ ಓದಿಲ್ಲ.ಪ್ರತಿ ಸಿಕ್ಕಿದ ನಂತರ ಪೂರ್ಣ ಓದಿ ನಂತರ ಮಾಧ್ಯಮಗಳಿಗೆ‌ ಪ್ರತಿಕ್ರಿಯಿಸುತ್ತೇನೆ ಎಂದು ಹೇಳಿದರು.

ಆದೇಶದ ಪ್ರತಿ‌ ಸಿಕ್ಕ ಕೂಡಲೇ  ಓದಿ,ನಮ್ಮ ವಕೀಲರ ಜತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.

ಈಗ ನಾನು ಕೇರಳಕ್ಕೆ ಹೋಗುತ್ತಿದ್ದೇನೆ,ರಾತ್ರಿ ವೇಳೆಗೆ ಕೋರ್ಟ್ ಪ್ರತಿ ಸಿಗಲಿದೆ,ದೂರುದಾರರು ಮೈಸೂರಿನವರು,ಹಾಗಾಗಿ ತನಿಖೆ ಕೂಡಾ ಮೈಸೂರು ಲೋಕಾಯುಕ್ತದಲ್ಲೇ ನಡೆಯಲಿದೆ.ತನಿಖೆಗೆ ನಾನು ಸಿದ್ದವಾಗಿದ್ದೇನೆ ಎಂದು ಸಿಎಂ‌ ಹೇಳಿದರು.