ಮೈಸೂರು: ಪೊಲೀಸ್ ಠಾಣೆ ಹಾಗೂ ಕೌಟುಂಬಿಕ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನ ಹಿಂದಕ್ಕೆ ಪಡೆಯದ ಪತ್ನಿಯನ್ನ ಪತಿ ಅರೆನಗ್ನಗೊಳಿಸಿ ಹಲ್ಲೆ ನಡೆಸಿದ ವಿಲಕ್ಷಣ ಘಟನೆ ಮೈಸೂರಿನಲ್ಲಿ ನಡೆದಿದೆ.
ಪತ್ನಿಯನ್ನ ಪತಿ ಮಹೇಶ್
ಬಲವಂತವಾಗಿ ಕೂಡಿ ಹಾಕಿ,ನಡುರಸ್ತೆಯಲ್ಲಿ ಅರೆನಗ್ನಗೊಳಿಸಿ ಹಲ್ಲೆ ನಡೆಸಿ ಕಿರುಕುಳ ನೀಡಿದ್ದಾರೆ.
ಹಾಗಾಗಿ ಪತಿ, ಮಾವ ಮತ್ತು ಪತಿಯ ಅಣ್ಣನ ವಿರುದ್ದ ಪತ್ನಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪಲ್ಲವಿ (24) ಎಂಬುವರೇ ಕಿರುಕುಳಕ್ಕೆ ಒಳಗಾದ ಗೃಹಿಣಿ.
ಪತಿ ಮಹೇಶ್, ಮಾವ ಮಲ್ಲಯ್ಯ ಹಾಗೂ ಪತಿ ಅಣ್ಣ ಶಿವು ವಿರುದ್ದ ಎಫ್ ಐ ಆರ್ ದಾಖಲಾಗಿದೆ.
ಮಹೇಶ್ ವಿರುದ್ದ ಪಲ್ಲವಿ ಪೊಲೀಸ್ ಠಾಣೆಯಲ್ಲಿ, ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು ವಿಚಾರಣೆ ಹಂತದಲ್ಲಿದೆ.
ಕೆಲವು ದಿನಗಳ ಹಿಂದೆ ಪತ್ನಿಯನ್ನ ಭೇಟಿ ಮಾಡಿ ಅನ್ಯೋನ್ಯವಾಗಿ ಇರೋಣವೆಂದು ನಂಬಿಸಿ ಪಲ್ಲವಿಯನ್ನ ಮಹೇಶ್ ಕರೆತಂದು ಪ್ರತ್ಯೇಕವಾಗಿ ಬಾಡಿಗೆ ಮನೆಯಲ್ಲಿ ಇರಿಸಿದ್ದಾನೆ.ಎರಡು ದಿನ ಸರಿ ಇದ್ದ ಮಹೇಶ್ ಮತ್ತೆ ಕ್ಯಾತೆ ತೆಗೆದು ಪತ್ನಿ ಮೇಲೆ ದರ್ಪ ತೋರಿಸಿದ್ದಾನೆ.
ಪ್ರಕರಣಗಳನ್ನ ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ, ಆಕೆಯ ಯಾವ ಭಾಗವನ್ನೂ ನೋಡದೆ ಹಿಗ್ಗಾಮುಗ್ಗ ಥಳಿಸಿದ್ದಾನೆ. ಇದನ್ನ ಪ್ರಶ್ನಿಸಲು ಮಾವ ಮಲ್ಲಯ್ಯನ ಬಳಿ ಬಂದಾಗ ಪತಿ ಹಾಗೂ ಅಣ್ಣ ಶಿವು ಸೇರಿದಂತೆ ಮೂವರು ನಡುರಸ್ತೆಯಲ್ಲಿ ಅರೆನಗ್ನಗೊಳಿಸಿ ಹಲ್ಲೆ ನಡೆಸಿದ್ದಾರೆಂದು ಪಲ್ಲವಿ ದೂರಿನಲ್ಲಿ ತಿಳಿಸಿದ್ದಾರೆ.
ಕೊಲೆ ಮಾಡುವ ಉದ್ದೇಶದಿಂದಲೇ ಪತಿ ಹಾಗೂ ಮಾವ ಪತಿಯ ಅಣ್ಣ ಹಲ್ಲೆ ನಡೆಸಿದ್ದಾರೆಂದು ಪಲ್ಲವಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.