ಮೈಸೂರು: ಸಾರ್ವಜನಿಕ ಪ್ರದೇಶದಲ್ಲಿ ಲಾಂಗ್ ಬೀಸಿ ಭಯದ ವಾತಾವರಣ ಸೃಷ್ಟಿಸಿದ್ದ ರೌಡಿ ಸೇರಿದಂತೆ ಇಬ್ಬರ ವಿರುದ್ದ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೌಡಿ ಮೋಹನ್ ಅಲಿಯಾಸ್ ಚಿಂಟು ಹಾಗೂ ರಕ್ಷಿತ್ ಅಲಿಯಾಸ್ ಕೇಕು ಎಂಬುವರ ವಿರುದ್ದ ಪ್ರಕರಣ ದಾಖಲಾಗಿದೆ.
ಮಾ. 11ರಂದು ನಗರದ ಕೆ.ಜಿ.ಕೊಪ್ಪಲಿನ ಸಿದ್ದಪ್ಪಾಜಿ ವೃತ್ತದಲ್ಲಿ ಮೋಹನ್ ಹಾಗೂ ರಕ್ಷಿತ್ ಲಾಂಗ್ ಪ್ರದರ್ಶಿಸಿ ಭಯದ ವಾತಾವರಣ ಸೃಷ್ಟಿಸಿದ್ದು ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ನ ಸದಸ್ಯರಾದ ಬಸವರಾಜ ಅರಸ್ ಅವರು ಈ ದೃಶ್ಯಗಳನ್ನ ಗಮನಿಸಿ ನಂತರ ಪರಿಶೀಲನೆ ನಡೆಸಿದಾಗ ಲಾಂಗ್ ಪ್ರದರ್ಶಿಸಿರುವುದು ಖಚಿತವಾಗಿದೆ.
ಹಾಗಾಗು ಇಬ್ಬರು ಆರೋಪಿಗಳ ವಿರುದ್ಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.