ಅಪರಿಚಿತ ವಾಹನ ಡಿಕ್ಕಿ:ಇಬ್ಬರು ಯುವಕರ‌ ದುರ್ಮರಣ

ಚಾಮರಾಜನಗರ: ಅಪರಿಚಿತ ವಾಹನ ಡಿಕ್ಕಿ ಹೊಡೆದು ಇಬ್ಬರು ಯುವಕರು ಮೃತಪಟ್ಟು ಮತ್ತೊಬ್ಬ ಚಿಂತಾಜನಕವಾಗಿರುವ ಘಟನೆ ತಾಲೂಕಿನ ಹರದನಹಳ್ಳಿ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ತಾಲೂಕಿನ ಬ್ಯಾಡಮೂಡ್ಲು ಗ್ರಾಮದ ಬಸವಣ್ಣ ಅವರ ಪುತ್ರ ಅಭಿ(24) ಮತ್ತು ಸಿದ್ದರಾಜು ಎಂಬುವರ ಮಗ ಅಭಿಷೇಕ್(24) ಮೃತಪಟ್ಟ ದುರ್ದೈವಿಗಳು.

ಸಿದ್ದರಾಜು ಅವರ ಎರಡನೇ ಮಗ ಮಾದೇಶ್(23) ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.