ಸಿ‍ದ‍್ಧರಾಮಯ್ಯ ಪಾಕ್,ಆಫ್ಘಾನಿಸ್ತಾನದಲ್ಲಿ ಸ್ಪರ್ಧಿಸಲಿ -ಅಶೋಕ್ ವ್ಯಂಗ್ಯ

ಬೆಂಗಳೂರು: ಮಾಜಿ ಮುಖ್ಯ ಮಂತ್ರಿ ಸಿದ್ಧರಾಮಯ್ಯ ವರಣಾದಲಲ್ಲಾ ಪಾಕಿಸ್ತಾನದಲ್ಲಿ ಬೇಕಾದರೂ ನಿಲ್ಲಲಿ ಎಂದು ಸಚಿವ ಆರ್.ಅಶೋಕ್ ವ್ಯಂಗ್ಯ ವಾಡಿದ್ದಾರೆ.

ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅಶೋಕ್, ಸಿದ್ಧರಾಮಯ್ಯ ವರುಣಾ ಅಲ್ಲದಿದ್ದರೆ ಪಾಕ್,  ಆಫ್ಘಾನಿಸ್ತಾನ,ಬಾಂಗ್ಲಾದಲ್ಲಿ ಸ್ಪರ್ಧಿಸಲಿ.  ಬಹುಶಃ ಆ ದೇಶಗಳಲ್ಲಿ ಅವರು ಗೆಲ್ಲಬಹುದು ಎಂದು ಟೀಕಿಸಿದರು.

ಹೇಗೂ ಸಿದ್ಧರಾಮಯ್ಯ ರಾಜ್ಯದ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಗೆಲ್ಲುವುದಿಲ್ಲ, ಈ ಮೊದಲೇ  ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತಿದ್ದಾರೆ. ಬಾದಾಮಿಯಿಂದ ಓಡಿ ಹೋಗಿದ್ದಾರೆ. ಮತ್ತೆ ವರುಣಾ ಕಡೆ ಮುಖ ಮಾಡುತ್ತಿದ್ದಾರೆ. ಹಾಗಾಗಿ ಅವರು ಬೇರೆ ದೇಶಕ್ಕೆ ಹೋದರೆ ಒಳ್ಳೆಯದು ಎಂದು ವ್ಯಂಗ್ಯವಾಡಿದರು.

ವಿಜಯ ಸಂಕಲ್ಪಯಾತ್ರೆ ಮೂಲಕ ಜನಜಾಗೃತಿ ಮಾಡುತ್ತಿದ್ದೇವೆ.ಬಿಜೆಪಿಯಲ್ಲಿ ಬಹಳಷ್ಟು ರಾಜ್ಯ, ಕೇಂದ್ರ ನಾಯಕರಿದ್ದಾರೆ. ಅದೇ ಕಾಂಗ್ರೆಸ್ ಗೆ ಸಿದ್ಧರಾಮಯ್ಯ, ಡಿ.ಕೆ. ಶಿವಕುಮಾರ್ ಬಿಟ್ಟರೆ 3ನೇ ಲೀಡರ್ ಇಲ್ಲ ಎಂದು ಕುಟುಕಿದರು.