ಬೆದರಿಕೆ ಪತ್ರ ಬರೆದವರು ಯಾರು ಗೊತ್ತು -ಸುದೀಪ್

ಬೆಂಗಳೂರು: ಬೆದರಿಕೆ ಪತ್ರ ಬಂದಿರುವುದು ನಿಜ, ಅದನ್ನು ಬರೆದಿರುವವರು ಯಾರು ಎಂಬುದೂ ನನಗೆ ಗೊತ್ತು, ಅವರಿಗೆ ಸದ್ಯದಲ್ಲೇ ಯಾವ ರೀತಿಯಲ್ಲಿ ಉತ್ತರ ಕೊಡಬೇಕೊ ಅದನ್ನು ಸೂಕ್ತ ಸಮಯದಲ್ಲಿ ಕೊಡುತ್ತೇನೆ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ಪಕ್ಷದಿಂದ ಯಾರೊಬ್ಬರಿಗೂ ಟಿಕೆಟ್ ಕೊಡಿಸುವ ಮಟ್ಟಕ್ಕೆ ಬೆಳೆದಿಲ್ಲ, ಏನಿದ್ದರೂ ಚಿತ್ರ ನೋಡಲು ಟಿಕೆಟ್ ಕೊಡಿಸಬಹುದಷ್ಟೇ ಎಂದು ನುಡಿದರು.

ನಾನು ಸಿನಿಮಾ ಜೀವನಕ್ಕೆ ಕಾಲಿಟ್ಟಾಗ  ಹಲವರು ನನಗೆ ನೆರವು ನೀಡಿದ್ದಾರೆ. ಅಂತವರು ಈಗ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ನಾನು ಅವರ ಪರವಾಗಿ ನಿಲ್ಲುತ್ತೇನೆಯೇ ಹೊರತು ನಾನು ಈ‌ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟವಾಗಿ ನುಡಿದರು‌ ಕಿಚ್ಚ.