42 ಕ್ಷೇತ್ರಗಳಿಗೆ ಕಾಂಗ್ರೆಸ್‍ ಅಭ್ಯರ್ಥಿಗಳ ಘೋಷಣೆ: ಎರಡರಲ್ಲಿ ಸಿದ್ದು, ಎರಡರಲ್ಲಿ ಡಿಕೆಶಿ ಮೇಲುಗೈ

ನವದೆಹಲಿ: ಕರ್ನಾಟಕ ವಿದಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ 2 ನೇ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದೆ.

ಒಟ್ಟು 42 ಮಂದಿ ಅಭ್ಯರ್ಥಿಗಳ ಪಟ್ಟಿಯನ್ನು  ಕೈ ನಾಯಕರು ಬೆಳಿಗ್ಗೆ ಬಿಡುಗಡೆ ಮಾಡಿದ್ದಾರೆ.

ತಮ್ಮ ಆಪ್ತ ರಿಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದ ಡಿ.ಕೆ. ಶಿವಕುಮಾರ್ ಗೆ ಎರಡು ಕ್ಷೇತ್ರದಲ್ಲಿ ಹಿನ್ನಡೆಯಾಗಿದೆ.

ತೀರ್ಥಹಳ್ಳಿಯಲ್ಲಿ ಮಂಜುನಾಥ ಗೌಡ ಪರ ಡಿಕೆಶಿ ಪಟ್ಟು ಹಿಡಿದಿದ್ದರು. ಆದರೆ ಕಿಮ್ಮನೆ ರತ್ನಾಕರ್ ಗೆ ಟಿಕೆಟ್ ಕೊಡಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ.

ಹಾಗೆಯೇ ಕಲಘಟಗಿಯಲ್ಲಿ ನಾಗರಾಜ್ ಚಬ್ಬಿಗೆ ಟಿಕೆಟ್ ಕೊಡುವಂತೆ ಡಿಕೆಶಿ ಕೋರಿದ್ದರು ಆದರೆ ಇಲ್ಲೂ ಸಂತೋಷ್ ಲಾಡ್ ಗೆ ಟಿಕೆಟ್ ಕೊಡಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ ಹಾಗಾಗು ಎರಡೂ ಕ್ಷೇತ್ರದಲ್ಲಿ ಡಿಕೆಶಿಗೆ ಹಿನ್ನಡೆಯಾಗಿದೆ.

ಬೇಲೂರಿನಲ್ಲಿ ಡಿಕೆಶಿ ಕೈ ಮೇಲಾಗಿದೆ. ರುದ್ರೇಶ್ ಗೌಡ ಕುಟುಂಬ ಹಾಗೂ ಸಿದ್ದರಾಮಯ್ಯ ಬಣ ಎರಡಕ್ಕೂ ಟಾಂಗ್ ಕೊಟ್ಟು ತಮ್ಮ ಆಪ್ತ ಮಾಜಿ ಸಚಿವ ಗಂಡಸಿ ಶಿವರಾಂಗೆ ಟಿಕೆಟ್ ಕೊಡಿಸುವಲ್ಲಿ  ಯಶಸ್ವಿಯಾಗಿದ್ದಾರೆ.

ಕೋಲಾರಕ್ಕೆ ಇನ್ನೂ ಟಿಕೆಟ್ ಪ್ರಕಟಿಸಿಲ್ಲ ಹಾಗಾಗಿ ಸಿದ್ದೂಗಾ ಅಥವಾ ಇನ್ಯಾರಿಗೆ ಟಿಕೆಟ್ ಎಂಬ ಕುತೂಹಲ ಹಾಗೆಯೇ ಇದೆ

ಜತೆಗೆ ಹಾಲಿ ಶಾಸಕ ವಿ. ಮುನಿಯಪ್ಪ ಕ್ಷೇತ್ರ ಶಿಡ್ಲಘಟ್ಟಕ್ಕೂ ಕೂಡ ಘೋಷಣೆ ಆಗಿಲ್ಲ.

ಚಿತ್ರದುರ್ಗದಲ್ಲಿ ಪರಿಷತ್ ಮಾಜಿ ಸದಸ್ಯ ರಘು ಆಚಾರ್ ಗೆ ಟಿಕೆಟ್ ನೀಡದೆ ದೊಡ್ಡಣ್ಣ ಅಳಿಯ ವೀರೇಂದ್ರ ಪಪ್ಪಿಗೆ ಮಣೆ ಹಾಕಲಾಗಿದೆ.

ಹಾಲಿ ಶಾಸಕರ ಆಯ್ಕೆಯಲ್ಲಿ ಗೊಂದಲವಿದ್ದು  ಲಿಂಗಸುಗೂರು, ಪುಲಕೇಶಿ ನಗರ, ಕುಂದಗೋಳ, ಹರಿಹರ, ಶಿಡ್ಲಘಟ್ಟಕ್ಕೆ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗಿಲ್ಲ.

ನಿಪ್ಪಾಣಿಕಾಕಾಸಾಹೇಬ್ ಪಾಟೀಲ್, ಗೋಕಾಕ್ಮಹಾಂತೇಶ್ ಕಡಾಡಿ, ಕಿತ್ತೂರುಬಾಬಾ ಸಾಹೇಬ್ ಡಿ ಪಾಟೀಲ್, ಸವದತ್ತಿ ಯಲ್ಲಮ್ಮವಿಶ್ವಾಸ್ ವಸಂತ್ ವಿದ್ಯಾ, ಮುಧೋಳ ಎಸ್ಸಿರಾಮಪ್ಪ ಬಾಳಪ್ಪ ತಿಮ್ಮಾಪೂರ್, ಬಿಳಗಿಜಿ.ಟಿ ಪಾಟೀಲ್, ಬಾದಾಮಿಭೀಮಸೇನಾ ಬಿ ಚಿಮ್ಮನಕಟ್ಟಿ, ಬಾಗಲಕೋಟೆ ಹುಲ್ಲಪ್ಪ ವೈ ಮೇಟಿ, ಬಿಜಾಪುರ ನಗರ ಅಬ್ದುಲ್ ಅಹ್ಮದ್ ಖಾಜಸಾಹೇಬ್ ಮುಷರಫಿ, ನಾಗಠಾಣ ಎಸ್ಸಿವಿಠಲ್ ಕಟಕದೋಂಧ್, ಅಫ್ಜಲಪುರ್ಎಂವೈ ಪಾಟೀಲ್, ಯಾದಗಿರಿಚನ್ನರೆಡ್ಡಿ ಪಾಟೀಲ್, ಗುರುಮಿಠ್ಕಲ್ಚಿಂಚನಸೂರ್, ಕಲಬುರಗಿ ದಕ್ಷಿಣಅಲ್ಲಮಪ್ರಭು ಪಾಟೀಲ್, ಬಸವಕಲ್ಯಾಣ ವಿಜಯ್ ಧರ್ಮಸಿಂಗ್, ಗಂಗಾವತಿ ಇಕ್ಬಾಲ್ ಅನ್ಸಾರಿ, ನರಗುಂದಬಿ.ಆರ್ ಯಾವಗಲ್, ಧಾರವಾಡವಿನಯ್ ಕುಲಕರ್ಣಿ, ಕಲಘಟಗಿಸಂತೋಷ್ ಎಸ್ ಲಾಡ್, ಸಿರಸಿಭಿಮಣ್ಣ ನಾಯಕ್, ಯಲ್ಲಾಪುರವಿಎಸ್ ಪಾಟೀಲ್, ಕೂಡ್ಲಿಗಿಶ್ರೀನಿವಾಸ್ ಎನ್.ಟಿ, ಮೊಳಕಾಲ್ಮೂರುಎನ್ ವೈ ಗೋಪಾಲಕೃಷ್ಣ, ಚಿತ್ರದುರ್ಗಕೆ.ಸಿ ವೀರೇಂದ್ರ, ಹೊಳಲ್ಕೆರೆಹೆಚ್. ಆಂಜನೇಯ, ಚನ್ನಗಿರಿಬಿ.ವಿ ಶಿವಗಂಗಾ, ತೀರ್ಥಹಳ್ಳಿಕಿಮ್ಮನೆ ರತ್ನಾಕರ್, ಉಡುಪಿಪ್ರಸಾದ್ ರಾಜ್ ಕಾಂಚಾನ, ಕಡೂರುಕೆ.ಎಸ್ ಆನಂದ್, ತುಮಕೂರು ನಗರ, ಇಕ್ಬಾಲ್ ಅಹ್ಮದ್, ಗುಬ್ಬಿಎಸ್.ಆರ್ ಶ್ರೀನಿವಾಸ್, ಯಲಹಂಕಕೇಶವ ರಾಜಣ್ಣ ಬಿ, ಯಶವಂತಪುರಎಸ್. ಬಾಲರಾಜ್ ಗೌಡ, ಮಹಾಲಕ್ಷ್ಮಿ ಲೇ ಔಟ್ ಕೇಶವಮೂರ್ತಿಪದ್ಮನಾಭನಗರರಘುನಾಥ ನಾಯ್ಡು, ಮೇಲುಕೋಟೆದರ್ಶನ್ ಪುಟ್ಟಣ್ಣಯ್ಯ, ಮಂಡ್ಯಪಿ. ರವಿಕುಮಾರ್, ಕೆ ಆರ್ ಪೇಟೆಬಿ.ಎಲ್ ದೇವರಾಜ್, ಬೇಲೂರುಬಿ. ಶಿವರಾಂ, ಮಡಿಕೇರಿಮಂಥರ್ ಗೌಡ, ಚಾಮುಂಡೇಶ್ವರಿಸಿದ್ದೇಗೌಡ, ಕೊಳ್ಳೇಗಾಲ. ಆರ್ ಕೃಷ್ಣಮೂರ್ತಿ.

ಟಿಕೆಟ್ ವಂಚಿತರು: ಕಡೂರುವೈ. ಎಸ್. ವಿ ದತ್ತ, ಚನ್ನಗಿರಿವಡ್ನಾಳ್ ರಾಜಣ್ಣ, ಚಿತ್ರದುರ್ಗರಘು ಆಚಾರ್, ತೀರ್ಥಹಳ್ಳಿಮಂಜುನಾಥಗೌಡ, ಮೊಳಕಾಲ್ಮೂರುಯೋಗೀಶ್ ಬಾಬು, ಕಲಘಟಗಿನಾಗರಾಜ್ ಛಬ್ಬಿ.