ಮೋದಿ ವಿಶ್ವದ ನಾಯಕರು; ಬೊಮ್ಮಾಯಿ ಬಣ್ಣನೆ

ಮಂಡ್ಯ: ಪ್ರಧಾನಿ ನರೇಂದ್ರ ಮೋದಿಯವರನ್ನು ವಿಶ್ವದ ನಾಯಕರೆಂದು ಗುರುತಿಸಲಾಗಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಮೇರಿಕಾ ಚೈನಾ‌,ಪಾಕಿಸ್ತಾನದ ಜನರೂ ಕೂಡಾ ಮೋದಿಯವರ ಸಮರ್ಥ ನಾಯಕತ್ವ ಒಪ್ಪಿ ಕೊಂಡಾಡುತ್ತಿದ್ದಾರೆ ಎಂದು  ತಿಳಿಸಿದರು.

1990ರ ದಶಕದಿಂದ ಬೆಂಗಳೂರು ಮೈಸೂರು ರಸ್ತೆ ಅಭಿವೃದ್ದಿ ಪ್ರಸ್ತಾಪ ಇದ್ದರೂ 2014 ರಲ್ಲಿ ಪ್ರಧಾನ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಹಂತ ಹಂತವಾಗಿ  ರಸ್ತೆ ಅಭಿವೃದ್ಧಿ ಯೋಜನೆ ತಯಾರಾಗಿ ಅನುಷ್ಠಾನ ವಾಗಿದೆ ಎಂದು ತಿಳಿಸಿದರು.

2019 ರಲ್ಲಿ ಕೆಲಸ ಪ್ರಾರಂಭವಾಗಿ 2023ರಲ್ಲಿ ಮೋದಿಯವರಿಂದಲೇ ಕೆಲಸ ಮುಗಿದಿದೆ,

ರಸ್ತೆಗೆ 4000 ಕೋಟಿಗೂ ಹೆಚ್ಚುವರಿ ಅನುದಾನ ನೀಡಿದ್ದಾರೆ,ಜನರಿಗೆ ರಸ್ತೆ ಯಾರು ಮಾಡಿದ್ದಾರೆ ಎಂಬುದು ಈಗ ಗೊತ್ತಿದೆ ಎಂದು ಹೇಳಿದರು.

ಎಲ್ಲಾ ಯೋಜನೆ ಕಾಲಮಿತಿಯೊಳಗೆ ಪೂರ್ಣ ಗೊಳಿಸುವುದು ಮೋದಿಯವರ  ಕಾರ್ಯ ವೈಖರಿ. ಈ ರಸ್ತೆ ಅದಕ್ಕೆ ಉದಾಹರಣೆ ಎಂದರು.

ಕೇಂದ್ರ ದಿಂದ ಕಿಸಾನ್ ಸಮ್ಮಾನ್ ಯೋಜನೆಯಡಿ 16000 ಕೋಟಿ ಹಾಗೂ  ರಾಜ್ಯ ಸರ್ಕಾರದಿಂದ 4000ಕೊಟಿ ರೂ  ರೈತರ ಖಾತೆಗೆ ಸೇರಿದೆ

ಕರ್ನಾಟಕ ರಾಜ್ಯದ ಅಭಿವೃದ್ಧಿಗೆ ಡಬಲ್ ಇಂಜಿನ್ ಸರ್ಕಾರಗಳು ಶ್ರಮಿಸುತ್ತಿದೆ ಎಂದು ಬೊಮ್ಮಾಯಿ ಹೇಳಿದರು.

ಮಂಡ್ಯ ಸಕ್ಕರೆ ಕಾರ್ಖಾನೆ ಮೈಶುಗರ್ ಪನಾರಂಭಕ್ಕೆ 100ಕೋಟಿ ರೂ ನೀಡಲಾಗಿದೆ.ವಿ.ಸಿ ನಾಲೆ ಸೇರಿದಂತೆ ಜಿಲ್ಲೆಯ ‌ನೀರಾವರಿ ಯೋಜನೆಗಳನ್ನು ಪೂರ್ಣ ಗೊಳಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಜಿಲ್ಲೆಯ 2ಲಕ್ಷ ಜನರಿಗೆ ಕಿಸಾನ್ ಸಮ್ಮಾನ್ ಯೋಜನೆ ಲಾಭ ದೊರೆತಿದೆ.35000 ಮಕ್ಕಳಿಗೆ ರೈತ ವಿದ್ಯಾ ನಿಧಿ, 4ಲಕ್ಷ ಮಂದಿಗೆ ಆಯುಷ್ಮಾನ್ ಯೋಜನೆ  ನೀಡಲಾಗಿದೆ.‌

ಮಂಡ್ಯದ ಜನ ಬೆಲ್ಲದಷ್ಟೇ ಸಿಹಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಸಿಎಂ ನಮ್ಮ ರಿಪೋರ್ಟ್ ಕಾರ್ಡ್ ನೋಡಿ ಆಶೀರ್ವದಿಸಿ ಎಂದು ಮನವಿ ಮಾಡಿದರು